ಕಾ.ತ.ಚಿಕ್ಕಣ್ಣರವರು ಸಾಹಿತಿ. ಕರ್ನಾಟಕ ಸರಕಾರದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದವರು. ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿಯಾಗಿದ್ದರು. == ಬಾಲ್ಯ == ಹುಟ್ಟೂರು ಕಾಳಮ್ಮನ ಕೊಪ್ಪಲು, ಮೈಸೂರು ಜಿಲ್ಲೆ. ತಂದೆ ತಮ್ಮೇ ಗೌಡ, ತಾಯಿ ಚೆನ್ನಮ್ಮ. == ವಿದ್ಯಾಬ್ಯಾಸ == ಕಾಳಮ್ಮನ ಕೊಪ್ಪಲು ಹೈಸ್ಕೂಲ್ ಹರದಹಳ್ಳಿ. ಪಿಯುಸಿ ಸಾಲಿಗ್ರಾಮ. ಪದವಿ ಮಹಾರಾಜ ಕಾಲೇಜು ಮೈಸೂರು, ಸ್ನಾತಕೊತ್ತರ ಪದವಿ ಮೈಸೂರು ವಿಶ್ವವಿದ್ಯಾನಿಲಯ. == ಸೇವೆ == ಭಾಷಾಂತರಕಾರನಾಗಿ ಸರ್ಕಾರಿ ಸೇವೆ ಪ್ರಾರಂಭ, ಕನ್ನಡ ಸಂಸ್ಕೃತಿ ಇಲಾಖೆಯ ಪ್ರಭಾರಿ ನಿದೇರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. == ಸಾಹಿತ್ಯ ಸೇವೆ == === ಕಥಾ ಸಂಕಲನ === ಬಿಳಲು ಬಿಟ್ಟ ಬದುಕು, ಒಡಲುರಿ , ವಾಸನಾಮಯ ಬದುಕಿನ ಆಚೆ-ಈಚೆ, ಮನಸು ಮುಗಿಲು, ಅಗಾಂತರ, ಕಂಡೇರಿ, ಮೋಡ ನೆರಳ ನಿರಾಳ, ಕಾತಚಿ ಕಥಾರಂಗ === ಕಾದಂಬರಿ === ಮುಂಜಾವು(1989), ದಂಡೆ(1999). === ನಾಟಕ === ವಧೂಟಿ(1997), ಚದುರಂಗ(2012). === ಪ್ರಬಂಧ ಸಂಕಲನ === ಬಳ್ಳಿಸಾಲು(1996) , ಉಕ್ಕೆ ಸಾಲು(2010) === ಕವನ ಸಂಕಲನ === ಗೋಚಲು (1997), ಮೆಕ್ಕೆ ಒಕ್ಕಲು(2010) === ಬಾಲ ಸಾಹಿತ್ಯ === ಕನಕದಾಸರು,(1982) === ಸಂಪಾದನೆ === ಕನಕ ಕಿರಣ, ಪ್ರೈಸ್ಲೆಸ್ ಗೋಲ್ಡ್, ಭಾರತಿ ಪ್ರಿಯ, ನಯಸೇನ, ಹೊನ್ನಾರು, ಸಂಗೋಳ್ಳಿ ರಾಯಣ್ಣ, ದಿನಮಾನ, ಕನಕೋದು, ಕನಕಭಾರತಿ, ಮುತ್ತು ಬಂದಿದೆ ಕೇರಿಗೆ, ಮೈತ್ರಿ, ಸಂಯುಕ್ತ, ಸಂಪದ, ಸ್ವರ್ಣ ಸಂಚಯ. === ನಿಯತಕಾಲಿಕೆ ಸಂಪಾದನೆ === ಕನ್ನಡ ಸಂಸ್ಕಂತಿ ವಾರ್ತೆ. ಕನಕಸ್ಪೂರ್ತಿ. === ಪ್ರಧಾನ ಸಂಪಾದನೆ === ಕಾಳಿದಾಸ, ಕೋಳೂರುಮಲ್ಲಪ್ಪ, ಡಾ.ಆರ್.ನಾಗಮಗೌಡ, ಟಿ.ಮರಿಗಪ್ಪ, ಸಂತಕವಿ ಕನಕದಾಸರು, ಅರಿವಿನ ಅಡಿಗೆ, ಕನಕ ಮರುದರ್ಶನ, ಕನಕ ತರಂಗಿಣಿ, ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕಂತಿಕ ರಾಜಾಕಾರಣ, ಜನಪದ ಲೋಕದೃಷ್ಟಿಯ ಮೂಲಕ ಕನಕಸಾಹಿತ್ಯ ಅಧ್ಯಯನ, ಕನಕದಾಸರ ಕಾವ್ಯ ಮತ್ತು ಸಂಗೀತ, ಕನಕ ಓದು, ಬಯಲು ಆಲಯದೊಳಗೊ, ಕನಕಲೋಕ. === ಕಾ.ತ.ಚಿ. ಕೃತಿಗಳ ಕುರಿತ ವಿಮರ್ಶಾ ಕೃತಿಗಳು === ಸೊಲ್ಲೆತ್ತಿ, ನೀರೋಳಗಣ ಬೆಳಕು, ಹೊತ್ತಿಗೆ == ದೃಶ್ಯರೂಪಕಗಳು == === ಕತೆಗಳು === ಒಡಲುರಿ, ಹುಚ್ಚೇರಿಯ ಎಸರಿನ ಪ್ರಸಂಗ, ದಾವರ, ಆಯಾಮ, ಕೊಂಡಿ ಮೂಳ್ಳುಗಳು, ಸಂತೆಮಾಳದ ಹಾದಿಗುಂಟ == ಕಥಾರಂಗ == === ನಾಟಕ === ಸತ್ಯವತಿ, ಕಟ್ಟುಗಳು, ವಂಶಸ್ಥರು, ಗಂಟಾದ ನಂಟು, ತಿರಿದುಣ್ಣವ ಜನರ ನಡುವೆ, ವಾಸನಾಮಯ ಬದುಕಿನ ಆಚೆ-ಈಚೆ, ಗದ್ದೆಗಮ್ಮ, ಹುಚ್ಚೀರಿಯ ಎಸರಿನ ಪ್ರಸಂಗ. === ದೂರದರ್ಶನದ ದಾರವಾಹಿಗಳು === ದಾವರ, ಆಯಾಮ, ಕಿವಿಮೇಲಿನ ಕೂದಲು, ಮುಂಗಾರು ಮಳೆಯ ಸಂಜೆ. === ದ್ವನಿಸುರುಳಿ === ಬೆಳ್ಳಕ್ಕಿ ಸಾಲು, ಕನಸು ಚೆಲ್ಲಾವೆ, ಇದೇನೆ ಸಖಿ. === ರಂಗ ನಿರ್ದೇಶನ === ಪಂಪಕಾವ್ಯ ವೈಭವ, ಮಾಯಾಲಾಸ್ಯ, ಮುತ್ತು ಬಂದಿದೆ ಕೇರಿಗೆ, ಬೆಳ್ಳಕ್ಕಿ ಸಾಲು, ಸಂತಕವಿ ಕನಕದಾಸರು, ತಲ್ಲಣಿಸದಿರು ಮನವೆ, ಕನಕ ಕಾವ್ಯ ವೈಭವ == ಪ್ರಶಸ್ತಿ == ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ. ವರ್ಧಮಾನ ಪುರಸ್ಕಾರ, ಆರ್ಯಭಟ ಪುರಸ್ಕಾರ, ವೀಚಿ ಸಾಹಿತ್ಯ ಪುಸ್ತಕ ಪುರಸ್ಕಾರ, ವಿಶ್ವಕಮ್ಮಟ ಚೇತನ ಪ್ರಶಸ್ತಿ (2012), ಕನಕರತ್ನ ಪ್ರಶಸ್ತಿ(2012), ಕನಕಶ್ರೀ ಪ್ರಶಸ್ತಿ(2012), ಡಾ.ಹೆಚ್.ಡಿ. ಚೌಡಯ್ಯ ಸಾಹಿತ್ಯ ಪ್ರಶಸ್ತಿ(2014), ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಗೌರವ ಪುರಸ್ಕಾರ(2014), ಕನ್ನಡ ತಮಿಳು ಸೌಹಾರ್ದ ಪ್ರಶಸ್ತಿ(2015), ಸಂಸ್ಕಂತಿ ದಾಮ ಸುವರ್ಣ ಶ್ರೀ ಪ್ರಶಸ್ತಿ(2016), ಇತರೆ ಸಾಂಸ್ಕಂತಿಕ ಸಂಘ ಸಂಸ್ಥೆಗಳಿಂದ ಗೌರವ. == ಆಡಳಿತ == ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ, ಭಾಷಾಂತರ ಸರಲೀಕರಣ ಸಮಿತಿ ಸದಸ್ಯ. ರಾಜ್ಯದ ವಿವಿಧ ಸಮಿತಿಯಲ್ಲಿ ಅಧ್ಯಕ್ಷ, ಸದಸ್ಯ, ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಸಮನ್ವಯಾಧಿಕಾರಿ. == ಉಲ್ಲೇಖ ==